ಶನಿವಾರಸಂತೆ, ಜೂ. 11: ಶನಿವಾರಸಂತೆ ಸಮೀಪದ ಮಣಗಲಿ ಗ್ರಾಮದ ಕೃಷಿಕ ಎಂ.ಪಿ. ಗಣಪತಿ (50) ಮನೆಯಿಂದ ಕಾಣೆಯಾಗಿರುವ ಕುರಿತು ಪೊಲೀಸರಿಗೆ ಪುಕಾರಾಗಿದೆ.

ಗಣಪತಿ ಮೇ 29 ರಂದು ಮನೆಯಿಂದ ಹಂಡ್ಲಿ ಗ್ರಾಮಕ್ಕೆ ತೆರಳಿ ಅಲ್ಲಿನ ಸಹಕಾರಿ ಸಂಘದಲ್ಲಿ ರೂ. 20 ಸಾವಿರ ಹಣ ಡ್ರಾ ಮಾಡಿಕೊಂಡು ತನ್ನ ಸ್ನೇಹಿತ ಉಮೇಶ್ ಎಂಬಾತನೊಂದಿಗೆ ಕೊಡ್ಲಿಪೇಟೆಗೆ ತೆರಳಿ ಬ್ರಾಂದಿ ಶಾಪ್‍ನಲ್ಲಿ ಮದ್ಯಪಾನ ಮಾಡಿ ತನಗೆ ಬೇರೆ ಕೆಲಸವಿದೆ ಎಂದು ಸ್ನೇಹಿತನನ್ನು ವಾಪಾಸ್ಸು ಕಳುಹಿಸಿದ್ದರೆನ್ನಲಾಗಿದೆ. ಬಳಿಕ ಅಂದಿನಿಂದ ಇಂದಿನವರೆಗೆ ಮನೆಗೆ ವಾಪಾಸು ಬಂದಿರುವದಿಲ್ಲ ಎಂದು ಅವರ ಮಗ ಎಂ.ಜಿ. ಕೀರ್ತಿ ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಮಾಹಿತಿ ದೊರೆತವರು ಶನಿವಾರಸಂತೆ ಪೊಲೀಸ್ ಠಾಣೆ ದೂ. 283333 ತಿಳಿಸುವಂತೆ ಕೋರಲಾಗಿದೆ.