ಕುಶಾಲನಗರ, ಜೂ. 11: ಸುಪ್ರೀಂಕೋರ್ಟ್ ಆದೇಶದಂತೆ ಕುಶಾಲನಗರ ವ್ಯಾಪ್ತಿಯ ಪೊಲೀಸ್ ಇಲಾಖೆಯಲ್ಲಿ ಕೆಲವು ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಹುದ್ದೆಗಳಲ್ಲಿ ಹಿಂಬಡ್ತಿಯಾಗಿದೆ. ಕುಶಾಲನಗರ, ಸುಂಟಿಕೊಪ್ಪ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಮೂವರು ಎಸ್‍ಐಗಳು, 4 ಜನ ಸಹಾಯಕ ಠಾಣಾಧಿಕಾರಿಗಳು ಹಾಗೂ ಇಬ್ಬರು ಮುಖ್ಯ ಪೇದೆಗಳಿಗೆ ಕೋರ್ಟ್ ಆದೇಶದಂತೆ ಹಿಂಬಡ್ತಿಯಾಗಿದ್ದು ತಮ್ಮ ಹಿಂದಿನ ಹುದ್ದೆಯಲ್ಲಿ ಮುಂದುವರೆಯುವಂತಾಗಿದೆ.

ಹಿಂಬಡ್ತಿ ಆದೇಶ ಜಾರಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಸುಪ್ರೀಂಕೋರ್ಟ್ ಕಟ್ಟಪ್ಪಣೆ ಮಾಡಿದ ಹಿನೆÀ್ನಲೆಯಲ್ಲಿ ಈ ಬೆಳವಣಿಗೆ ದೇಶದೆಲ್ಲೆಡೆ ನಡೆದಿದ್ದು ಅಂದಾಜು 5 ಸಾವಿರ ಜನ ಹಿಂಬಡ್ತಿಗೆ ಒಳಗಾಗಿದ್ದಾರೆ.