ಮಡಿಕೇರಿ, ಜೂ. 12: ಕೊಡಗು-ಹಿಂದೂ ಮಲಯಾಳಿ ಸಮಾಜದಿಂದ ಸಮಾಜದ 104 ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ಉಚಿತವಾಗಿ ನೀಡಲಾಯಿತು. ಸಂಘದ ಅಧ್ಯಕ್ಷ, ನಗರಸಭಾ ಸದಸ್ಯ ಕೆ.ಎಸ್. ರಮೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದೂ ಮಲಯಾಳಿ ಸಮಾಜದ 104 ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯವಾಗುವಂತೆ ಅಗತ್ಯ ನೋಟ್ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು.

ಎಸ್.ಎನ್.ಡಿ.ಪಿ. ಮಡಿಕೇರಿ ತಾಲೂಕು ಅಧ್ಯಕ್ಷ ವಾಸುದೇವ್, ಸಂಘದ ಪ್ರಧಾನ ಕಾರ್ಯದರ್ಶಿ ಧಮೇಂದ್ರ, ನಿರ್ದೇಶಕ ಪಿ.ಟಿ. ಉಣ್ಣಿಕೃಷ್ಣ, ಭರತ್, ದಿನೇಶ್, ಉತ್ತಮ್, ರವಿ ಅಪ್ಪುಕುಟ್ಟನ್, ಮನೋರಂಜನ್, ರಾಜೇಶ್ ಪಾಲ್ಗೊಂಡಿದ್ದರು.