ಮಡಿಕೇರಿ, ಜೂ. 12: ದ್ವೀತಿಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇ. 93 ರಷ್ಟು ಅಂಕಗಳಿಸಿ ತೇರ್ಗಡೆ ಹೊಂದಿದ ನಗರದ ಸಂತ ಮೈಕಲರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಜುನಿಮಾ ಅವರನ್ನು ಮಡಿಕೇರಿ ತಾಲೂಕು ಎಸ್.ಎನ್.ಡಿ.ಪಿ. ವತಿಯಿಂದ ಸನ್ಮಾನಿಸಲಾಯಿತು.

ಹಾಕತ್ತೂರಿನ ತೊಂಭತ್ತು ಮನೆಯ ತ್ರಿನೇತ್ರ ಯುವಕ ಸಂಘದ ಸಂಭಾಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳು ಹಾಗೂ ಸ್ಥಳೀಯ ಸದಸ್ಯರುಗಳು ಜುನಿಮಾಳನ್ನು ಸನ್ಮಾನಿಸಿದರು. ಎಸ್.ಎನ್.ಡಿ.ಪಿ. ಮಡಿಕೇರಿ ತಾಲೂಕು ಅಧ್ಯಕ್ಷ ಟಿ.ಆರ್. ವಾಸುದೇವ್, ಉಪಾಧ್ಯಕ್ಷ ಟಿ.ಕೆ. ಮಾಧವ, ಕಾರ್ಯದರ್ಶಿ ಸುಜಾತ ಶಿವರಾಮ್ ಹಾಗೂ ಮತ್ತಿತರ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜುನಿಮಾ ನಗರದ ಕಾಲೇಜು ರಸ್ತೆಯಲ್ಲಿರುವ ಕಾವೇರಿ ಬೇಕರಿಯ ಮಾಲೀಕ ರತಿಕೇಶನ್ ದಂಪತಿಗಳ ಪುತ್ರಿ.