*ಗೋಣಿಕೊಪ್ಪಲು, ಜೂ. 12: ಪ್ರವಾಸೋದ್ಯಮ ಮತ್ತು ರೇಷ್ಮೆ ಇಲಾಖೆ ಸಚಿವ ಸಾರಾ ಮಹೇಶ್ ಅವರಿಗೆ, ಎಫ್.ಕೆ.ಸಿ.ಸಿ.ಐ.ನ ಪ್ರವಾಸೋದ್ಯಮ ರಾಜ್ಯ ಸಮಿತಿ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ಸಮಿತಿ ಉಪಾಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ ಹಾಗೂ ಪದಾಧಿಕಾರಿಗಳು ಸಚಿವರಿಗೆ ಹೂಗುಚ್ಚ ನೀಡುವ ಮೂಲಕ ಅಭಿನಂದನೆ ಸಲ್ಲಿಸಿದರು. ವಿಧಾನಸಭೆಯಲ್ಲಿ ನೂತನ ಕಚೇರಿಯನ್ನು ಉದ್ಟಾಟಿಸಿದ ಸಂದರ್ಭ ರಾಜ್ಯ ಪ್ರವಾಸೋದ್ಯಮ ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು. ಪ್ರವಾಸೋದ್ಯಮ ಇಲಾಖೆಯಲ್ಲಿ ವಿನೂತನ ಯೋಜನೆಗಳನ್ನು ತರುವ ಮೂಲಕ ಇಲಾಖೆಯ ಅಭಿವೃದ್ದಿ ಕಾರ್ಯದಲ್ಲಿ ತೊಡಗಿಸಿಕೊಂಡು ರಾಜ್ಯದ ಪ್ರತಿ ಜಿಲ್ಲೆಯ ಪ್ರವಾಸೋದ್ಯಮ ಸ್ಥಳಗಳನ್ನು ಅಭಿವೃದ್ದಿ ಪಡಿಸಿ ಪ್ರವಾಸಿಗರಿಗೆ ಅನುಕೂಲವಾಗುವ ರೀತಿಯಲ್ಲಿ ನೂತನ ಚಿಂತನೆಗಳ ಮೂಲಕ ಹೊಸ ಯೋಜನೆಗಳನ್ನು ತರಬೇಕು ಎಂದು ಈ ಸಂದರ್ಭ ಮನವಿ ಮಾಡಿದರು. ಸಂಸ್ಥೆಯ ರಾಜ್ಯ ಪ್ರವಾಸೋದ್ಯಮ ಸಮಿತಿ ಉಪಾಧ್ಯಕ್ಷ ಕಾಡ್ಯಮಾಡ ಬಿ. ಗಿರೀಶ್ ಗಣಪತಿ ಗೌರವ ಉಪಾಧ್ಯಕ್ಷ ಸುದಾಕರ್ ಶೆಟ್ಟಿ, ಕರ್ನಾಟಕ ಹಿಸ್ಟ್ರಿ ಗಾರ್ಮೆಂಟ್ಸ್ ಅಸೋಸಿಯೇಷಿನ್‍ನ ಉಪಾಧ್ಯಕ್ಷ ಟಿ.ಹೆಚ್ ರಾಜ್ ಪುರೋಹಿತ್, ಇಂಡಿಯನ್ ಕಾಫಿ ಟ್ರೇಡ್ ಅಸೋಸಿಯೇಷನ್‍ನ ಉಪಾಧ್ಯಕ್ಷ ಪರಿಕಲ್ ಸುಂದರ್ ಹಾಜರಿದ್ದರು.