ಕುಶಾಲನಗರ, ಜೂ. 12: ಅಖಿಲ ಕರ್ನಾಟಕ ತೆಲುಗು ಜಂಗಮ ಸಮಾಜದ ಸಭೆ ಸ್ಥಳೀಯ ಚೌಡೇಶ್ವರಿ ದೇವಾಲಯ ಸಭಾಂಗಣದಲ್ಲಿ ನಡೆಯಿತು.

ಸಮಾಜದ ರಾಜ್ಯಾಧ್ಯಕ್ಷ ನಾಗರಾಜಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ ನಡೆಯಿತು.

ರಾಜ್ಯದಲ್ಲಿ ತಮ್ಮ ಸಮುದಾಯಕ್ಕೆ ರಾಜಕೀಯ ಮಾನ್ಯತೆ ಕಲ್ಪಿಸಬೇಕೆಂದು ನಾಗರಾಜಪ್ಪ ಸರಕಾರಕ್ಕೆ ಆಗ್ರಹಿಸಿದರು. ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಎನ್. ಶಿವರಾಂ, ಉಪಾಧ್ಯಕ್ಷ ಚಂದ್ರಬಾಬು, ಪ್ರಮುಖರಾದ ವೆಂಕಟೇಶ್, ಎಂ.ಆರ್. ರಾಮಮೂರ್ತಿ, ಸುನಂದ ಮತ್ತಿತರರು ಇದ್ದರು.