ಮಡಿಕೇರಿ, ಜೂ. 13: ಕರಿಕೆ ವಿ.ಎಸ್.ಎಸ್.ಎನ್. ಗೋದಾಮಿವಿನಿಂದ ಯಾರೋ 3 ಚೀಲ ದಾಸ್ತಾನು ಅಡಿಕೆ ಹಾಗೂ ರೂ. 10 ಸಾವಿರ ನಗದು ದೋಚಿರುವದಾಗಿ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಪೊಲೀಸರು ಬಿರುಸಿನ ತನಿಖೆ ನಡೆಸುತ್ತಿದ್ದು, ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.