ಮಡಿಕೇರಿ, ಜೂ. 13: ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಕಾಟಕೇರಿ ಬಳಿ ಹೆದ್ದಾರಿ ಬದಿ ವ್ಯಕ್ತಿಯೊಬ್ಬರಿಗೆ ಯಾವದೋ ಲಾರಿಯೊಂದು ಡಿಕ್ಕಿಯಾಗಿದ್ದು, ಆರೋಪಿ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ. ಈ ವೇಳೆ ಗಾಯಗೊಂಡಾತನನ್ನು ಅಲ್ಲಿನ ನಿವಾಸಿ ಹರೀಶ್ ಎಂಬವರು ನೋಡಿ, ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಸುಳ್ಯ ಮೂಲದ ಬಾಬು (70) ಎಂಬವರೆನ್ನಲಾದ ಗಾಯಾಳು ಮಧ್ಯರಾತ್ರಿ 2 ಗಂಟೆಗೆ ಅಸುನೀಗಿದ್ದಾರೆ.

ಮೃತರ ಸಂಬಂಧಿಕರು ಯಾರೂ ತಿಳಿಯದ ಕಾರಣ ದೇಹವನ್ನು ಆಸ್ಪತ್ರೆಯ ಶೈತ್ಯಾಗಾರದಲ್ಲಿ ಇರಿಸಲಾಗಿದೆ. ವಾರಸುದಾರರು ಯಾರಾದರೂ ಇದ್ದಲ್ಲಿ 08272-228777 ಅಥವಾ 9480804946 ಗೆ ಸಂಪರ್ಕಿಸುವಂತೆ ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಚೇತನ್ ಅವರು ತಿಳಿಸಿದ್ದಾರೆ.