ವೀರಾಜಪೇಟೆ, ಜೂ. 25: ವೀರಾಜಪೇಟೆಯಿಂದ ಗೋಣಿಕೊಪ್ಪಲಿನ ಕಡೆಗೆ ಹೋಗುತ್ತಿದ್ದ (ಕೆಎ 03 ಡಬ್ಲ್ಯು 8872) ಬೈಕ್ ಹಾಗೂ ಗೋಣಿಕೊಪ್ಪಲು ಕಡೆಯಿಂದ ವೀರಾಜಪೇಟೆಗೆ ಬರುತ್ತಿದ್ದ (ಕೆಎ 12 ಎಂ 5435)ರ ಜೀಪು ನಡುವೆ ಇಂದು ಸಂಜೆ ಕಾವೇರಿ ಕಾಲೇಜಿನ ತಿರುವಿನಲ್ಲಿ ಡಿಕ್ಕಿ ಸಂಭವಿಸಿದ್ದು ಬೈಕ್ ಸವಾರ ಮುಕ್ಕಾಟಿಕೊಪ್ಪದ ಸುಧಾಮ್ (21) ಹಾಗೂ ಕುಟ್ಟಂದಿ ಗ್ರಾಮದ ಗಗನ್ (19) ಗಂಭೀರ ಸ್ವರೂಪದ ಗಾಯ ಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಇಬ್ಬರು ಗಾಯಾಳುಗಳು ಇಲ್ಲಿನ ಸರಕಾರಿ ಪದವಿ ಕಾಲೇಜಿನ ವಿದ್ಯಾರ್ಥಿ ಗಳಾಗಿದ್ದಾರೆ.

ವೀರಾಜಪೇಟೆ ಗ್ರಾಮಾಂತರ ಪೊಲೀಸರಿಗೆ ಬೈಕ್ ಸವಾರ ಹಾಗೂ ಜೀಪಿನ ಚಾಲಕ ಇಬ್ಬರು ದೂರು ನೀಡಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಗಾಯಗೊಂಡ ಸುಧಾಮನನ್ನು ಮೈಸೂರಿನ ಆಸ್ಪತ್ರೆಗೆ ಸಾಗಿಸಲಾಗಿದ್ದು ಗಗನ್‍ನನ್ನು ಮಡಿಕೇರಿ ಆಸ್ಪತ್ರೆಗೆ ಸೇರಿಸಲಾಗಿದೆ.