ಮಡಿಕೇರಿ, ಜೂ. 26: ಜಿ.ಎಸ್.ಟಿ. ತೆರಿಗೆ ಕುರಿತಂತೆ ಭಾರತ ಸರ್ಕಾರದ ಅಧೀನದ ಮೈಸೂರಿನ ಜಿ.ಎಸ್.ಟಿ. ಆಯುಕ್ತರ ಕಚೇರಿ ವತಿಯಿಂದ ತಾ. 28ರಂದು (ನಾಳೆ) ಬೆಳಿಗ್ಗೆ 10.30ಕ್ಕೆ ನಗರದ ಹೊಟೇಲ್ ಕೂರ್ಗ್ ಇಂಟರ್‍ನ್ಯಾಷನಲ್‍ನಲ್ಲಿ ಕಾರ್ಯಾಗಾರ ಏರ್ಪಡಿಸಲಾಗಿದೆ.

ಮುಖ್ಯ ಅತಿಥಿಗಳಾಗಿ ಜಿ.ಎಸ್.ಟಿ.ಯ ಬೆಂಗಳೂರು ವಲಯದ ಮುಖ್ಯ ಆಯುಕ್ತ ಎ.ಕೆ. ಜ್ಯೋತಿ, ಮೈಸೂರಿನ ಪ್ರಧಾನ ಆಯುಕ್ತ ಜಿ.ವಿ. ಕೃಷ್ಣರಾವ್ ಅವರುಗಳು ಪಾಲ್ಗೊಳ್ಳಲಿದ್ದಾರೆ.