ಮಡಿಕೇರಿ, ಜೂ. 26: ಸುಂಟಿಕೊಪ್ಪ ಸಮೀಪದ 7ನೇ ಹೊಸಕೋಟೆಯ ಶ್ರೀ ಮಹಾಗಣಪತಿ ಮತ್ತು ದುರ್ಗಾಲಕ್ಷ್ಮಿ ದೇವರ ಪುನರ್ ಪ್ರತಿಷ್ಠಾಪನೆ ಶ್ರದ್ಧಾಭಕ್ತಿಯಿಂದ ನಡೆಯಿತು.

ಪುಂಡೂರಿನ ಶ್ರೀ ಗೋಪಾಲಕೃಷ್ಣ ಕೆದಿಲಾಯ ಅವರ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದು, ಮಹಾ ಗಣಪತಿ ಹಾಗೂ ದುರ್ಗಾಲಕ್ಷ್ಮಿ ಪ್ರತಿಷ್ಠಾಪನೆ, ಗಣಪತಿ ಹೋಮ, ಪ್ರತಿಷ್ಠಾ ಹೋಮ, ನೇತ್ರೋಮ್ಮಿಲನ, ಅಷ್ಟದುರ್ಗಾಲಕ್ಷ್ಮಿ ಹೋಮ, ಬ್ರಹ್ಮಕಲಶಾಪೂಜೆ ನಡೆದು ಸಿಂಹ ಲಗ್ನದಲ್ಲಿ ಬ್ರಹ್ಮಕಲಶಾಭಿಷೇಕ ಮತ್ತು ಅಷ್ಟಗಂಧ ಲೇಪನ, 108 ತೆಂಗಿನ ಕಾಯಿಯ ಮಹಾಪೂಜೆ, ಪೂರ್ಣಾಹುತಿ, ಮಹಾಪೂಜೆ, ಮಂತ್ರಾಕ್ಷತೆ, ಪ್ರಸಾದ ವಿನಿಯೋಗದೊಂದಿಗೆ ದೇವರ ಪ್ರತಿಷ್ಠಾಪನೆ ನೆರವೇರಿಸಲಾಯಿತು.