ಸೋಮವಾರಪೇಟೆ, ಜೂ. 28: ಸಮೀಪದ ದೊಡ್ಡಮಳ್ತೆ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಶ್ರೀ ನವಗಣಪತಿ ದೇವಾಲಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರೂ. 50 ಸಾವಿರ ಅನುದಾನ ನೀಡಲಾಯಿತು.

ಶ್ರೀ ವೀರೇಂದ್ರ ಹೆಗ್ಗಡೆಯವರು ಕ್ಷೇತ್ರದಿಂದ ಈ ಅನುದಾನ ಮಂಜೂರು ಮಾಡಿದ್ದು, ಯೋಜನೆಯ ತಾಲೂಕು ಯೋಜನಾಧಿಕಾರಿ ವೈ. ಪ್ರಕಾಶ್ ಅವರು, ದೇವಾಲಯ ಸಮಿತಿ ಅಧ್ಯಕ್ಷ ಡಿ.ಆರ್. ಪುಟ್ಟರಾಜು ಅವರಿಗೆ ಅನುದಾನದ ಚೆಕ್ ಹಸ್ತಾಂತರಿಸಿದರು. ಈ ಸಂದರ್ಭ ಯೋಜನೆಯ ಮೇಲ್ವಿಚಾರಕ ರಮೇಶ್, ದೇವಾಲಯ ಸಮಿತಿಯ ರಾಜೇಶ್, ಡಿ.ಡಿ. ಪುಟ್ಟರಾಜು ಅವರುಗಳು ಉಪಸ್ಥಿತರಿದ್ದರು.