*ಗೋಣಿಕೊಪ್ಪಲು, ಜೂ. 28: ಶಾಲಾ ಬಸ್ ಹಾಗೂ ಬೊಲೆರೋ ಜೀಪ್ ನಡುವೆ ಮುಖಾಮುಖಿ ಡಿಕ್ಕಿ ತಿತಿಮತಿ ಬಳಿಯ ಎಡತೊರೆ ರಸ್ತೆ ತಿರುವಿನಲ್ಲಿ ನಡೆದಿದೆ.

ಗುರುವಾರ ಮುಂಜಾನೆ ಮಕ್ಕಳನ್ನು ಕರೆದುಕೊಂಡು ಶಾಲೆಗೆ ಬರುತ್ತಿದ್ದ ದೇವರಪುರ ಗ್ರಾಮದ ರಾಜರಾಜೇಶ್ವರಿ ಶಾಲೆ ಬಸ್ ತಿತಿಮತಿ ಮಾರ್ಗವಾಗಿ ಬರುತ್ತಿದ್ದಾಗ ತಿತಿಮತಿಯಿಂದ ಕೋಣನಕಟ್ಟೆ ಮಾರ್ಗವಾಗಿ ಕೂಲಿ ಕಾರ್ಮಿಕರನ್ನು ಸಾಗಿಸುತ್ತಿದ್ದ ಬೊಲೆರೋ ಜೀಪ್ ಎದುರಾಗಿದೆ. ಎರಡು ವಾಹನಗಳು ಅತೀ ವೇಗದಲ್ಲಿ ಸಂಚರಿಸುತ್ತಿದ್ದರಿಂದ ಚಾಲಕ ನಿಯಂತ್ರಣ ತಪ್ಪಿ ಡಿಕ್ಕಿ ಸಂಭವಿಸಿದ್ದು, ದೊಡ್ಡ ಪ್ರಮಾಣದ ಅನಾಹುತದಿಂದ ಪಾರಾಗಿದೆ. ಅಪಘಾತ ನಡೆದ ಮಾರ್ಗದಲ್ಲಿ ಇತರೆ ವಾಹನಗಳು ಸುಮಾರು ಒಂದೂವರೆ ಗಂಟೆಗಳ ಕಾಲ ಸಂಚರಿಸಲು ಸಾಧ್ಯವಾಗದೆ ಟ್ರಾಫಿಕ್ ಜಾಮ್ ಉಂಟಾಯಿತು. ಮಕ್ಕಳನ್ನು ಸಾಗಿಸುವ ಶಾಲಾ ವಾಹನಗಳ ಚಾಲಕರು ಅತೀ ವೇಗದಿಂದ ಚಾಲನೆ ಮಾಡುವದರಿಂದ ಅಪಘಾತಗಳು ತಪ್ಪಿದ್ದಲ್ಲ. ಸುಪ್ರೀಂ ಕೋರ್ಟ್ ಆದೇಶ ನಿಯಮಗಳನ್ನು ಪಾಲಿಸದೆ ಇರುವದೇ ಅಪಘಾತ ನಡೆಯಲು ಕಾರಣವಾಗುತ್ತದೆ ಎಂದು ಸಾರ್ವಜನಿಕರು ಬಸ್ಸ್ ಚಾಲಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಪೆÇನ್ನಂಪೇಟೆ ಪೆÇಲೀಸ್ ಠಾಣಾ ಉಪನಿರೀಕ್ಷಕ ಮಹೇಶ್ ಬೇಟಿ ನೀಡಿ ಪರಿಶೀಲಿಸಿದರು.