ಕುಟ್ಟ, ಜೂ. 28: ಕೊಡಗು - ಕೇರಳ ಗಡಿ ಪ್ರದೇಶ ಈ ಬಾರಿ ಮೊದಲೇ ಮಳೆಯಿಂದ ತತ್ತರಿಸಿದೆ. ಈ ಹಿಂದೆ ಮಳೆಯಿಂದಾಗಿ ದಿನಗಟ್ಟಲೆ ಊರು ಕತ್ತಲೆ ಕೂಪದಲ್ಲಿ ಮುಳುಗಿತ್ತು. ಇದೀಗ ಕುಟ್ಟದಲ್ಲಿ ಇರುವ ಏಕೈಕ ಎಟಿಎಂ ಕಳೆದ ಒಂದು ತಿಂಗಳಿನಿಂದ ಬಾಗಿಲು ಭದ್ರಪಡಿಸಿ ಕಣ್ಮುಚ್ಚಿ ಕುಳಿತಿದೆ. ಕೆನರಾ ಬ್ಯಾಂಕ್‍ನ ಎಟಿಎಂ ಗ್ರಾಹಕರಿಗೆ ಲಭ್ಯವಾಗದ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರಂತೂ ಗಮನ ಹರಿಸಿಲ್ಲ.

ಇದೀಗ ಕುಟ್ಟ ನಿವಾಸಿಗಳು 20 ಕಿ.ಮೀ. ದೂರದ ಕಾಟಿಕೊಳ ಕೇರಳ ಅಥವ ಪೊನ್ನಂಪೇಟೆಗೆ ತೆರಳಿ ಎಟಿಎಂನಿಂದ ಹಣ ಪಡೆಯುವ ದುಸ್ಥಿತಿ ಬಂದೊಗಿದೆ.

- ಹೊಟ್ಟೆಂಗಡ ತಿಮ್ಮು