ವೀರಾಜಪೇಟೆ, ಜೂ. 27: ವೀರಾಜಪೇಟೆಯ ಸಂತ ಅನ್ನಮ್ಮ ಪ್ರೌಢಶಾಲೆಯ ಶಿಕ್ಷಕಿ ಕವಿತಾ ಮನೋಜ್ ಅವರಿಗೆ ಧಾರವಾಡ ವಿಶ್ವವಿದ್ಯಾಲಯ “ಮಕ್ಕಳ ವಿಶೇಷ ಶಿಕ್ಷಣ” ಎಂಬ ಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ.

ಕವಿತಾ ಮನೋಜ್‍ಗೆ ಇತ್ತೀಚೆಗೆ ವಿಶ್ವವಿದ್ಯಾಲಯ ಎಸ್.ಎ.ಎಸ್. ರಾವ್ ಸಭಾಂಗಣದಲ್ಲಿ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ಉಪ ಕುಲಪತಿ ರಾಜರಾಜೇಶ್ವರಿ ಮಹೇಶ್ ಅವರು ಪಿ.ಎಚ್.ಡಿ. ಪದವಿ ಪ್ರದಾನ ಮಾಡಿದರು. ಪ್ರೊ. ಕೆ.ಆರ್. ರವಿಕುಮಾರ್ ಅವರ ಮಾರ್ಗದರ್ಶನದಲ್ಲಿ ಕವಿತಾ ಮನೋಜ್ ಪ್ರಬಂಧವನ್ನು ಬರೆದಿದ್ದರು.

ಕವಿತಾ ಮನೋಜ್ ಅವರು ಇಲ್ಲಿನ ನಿಸರ್ಗ ಬಡಾವಣೆಯ ಉದ್ಯಮಿ ಎ. ಮನೋಜ್ ಅವರ ಪತ್ನಿ.