ಮಡಿಕೇರಿ, ಜೂ. 27: ಮಡಿಕೇರಿ ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಎರಡನೇ ಅವಧಿಗೆ ಬೆಟ್ಟಗೇರಿ ಕ್ಷೇತ್ರದ ಸದಸ್ಯ ಕೊಡಪಾಲು ಗಣಪತಿ ಆಯ್ಕೆ ಆಗಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿದ್ದ ಮಕ್ಕಂದೂರು ಕ್ಷೇತ್ರದ ಮುದ್ದಂಡ ರಾಯ್ ತಮ್ಮಯ್ಯ ಅವರ 20 ತಿಂಗಳ ಅಧಿಕಾರಾವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಿನ್ನೆ ನಡೆದ ತಾ.ಪಂ. ಸಭೆಯಲ್ಲಿ ಗಣಪತಿ ಅವರನ್ನು ಆಯ್ಕೆ ಮಾಡಲಾಗಿದೆ. ಇದರೊಂದಿಗೆ ನಾಮನಿರ್ದೇಶಿತ ಸದಸ್ಯರುಗಳಾಗಿ ಭಾಗಮಂಡಲ, ಬಲ್ಲಮಾವಟಿ, ಗಾಳಿಬೀಡು, ಕುಂದಚೇರಿ, ಮೇಕೇರಿ ಗ್ರಾ.ಪಂ. ಅಧ್ಯಕ್ಷರುಗಳನ್ನು ನೇಮಕ ಮಾಡಲಾಗಿದೆ.