ಮೂರ್ನಾಡು, ಜೂ. 27: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶ್ರೀ ಮಹದೇಶ್ವರ ಸ್ವಸಹಾಯ ಸಂಘದಿಂದ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಘದ ಸದಸ್ಯರು ಶಾಲಾ ಆವರಣ, ತೋಟದಲ್ಲಿ ಕಾಡು ಗಿಡಗಳನ್ನು ಕಡಿದು ಸ್ವಚ್ಛಗೊಳಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೊದ್ದೂರು ಬಿ ಒಕ್ಕೂಟ ಸೇವಾಪ್ರತಿನಿಧಿ ಕಾವೇರಿ, ಮೇಲ್ವಿಚಾರಕಿ ಜಯಶ್ರೀ ಶಾಲಾ ಮುಖ್ಯ ಶಿಕ್ಷಕಿ ಸುನೀತ ಹಾಗೂ ಶಾಲಾ ಎಸ್‍ಡಿಎಂಸಿ ವೃಂದ, ಶಿಕ್ಷಕರು ಹಾಜರಿದ್ದರು.