ಮಡಿಕೇರಿ, ಜೂ. 29: ಮಡಿಕೇರಿ ನಗರದ ಸನಿಹದಲ್ಲೇ ಬರುವ ಇಬ್ನಿವಳವಾಡಿ ಗ್ರಾಮದಲ್ಲಿ ಬುಧವಾರ ರಾತ್ರಿ ಕಾಡಾನೆ ಧಾಳಿಗೆ ಆಟೋರಿಕ್ಷಾವೊಂದು ಜಖಂಗೊಂಡಿದೆ. ದುರ್ಗೇಶ್ ಎಂಬವರಿಗೆ ಸೇರಿದ ಆಟೋದ ಮೇಲೆ ಆನೆ ಧಾಳಿ ನಡೆಸಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ.