ಶ್ರೀಮಂಗಲ, ಜೂ. 29: ಇಲ್ಲಿಗೆ ಸಮೀಪದ ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನ್ೀಟ್‍ಕುಂದ್ ರಸ್ತೆಯ ಡಾಂಬರೀಕರಣವು ಕಳಪೆಯಾಗಿದ್ದು, ಈ ರಸ್ತೆಯನ್ನು ಮರುಡಾಂಬರೀಕರಣ ಮಾಡಬೇಕೆಂದು ಬಿರುನಾಣಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಹಲವು ವರ್ಷಗಳಿಂದ ಗುಂಡಿ ಬಿದ್ದಿದ್ದ ನ್ೀಟ್‍ಕುಂದ್ ರಸ್ತೆಗೆ ಮೂರು ಲಕ್ಷ ರೂಪಾಯಿ ಮಳೆ ಹಾನಿ ಪರಿಹಾರ ನಿಧಿಯಿಂದ ಅನುದಾನ ದೊರೆತ್ತಿದ್ದು, ಇದರ ಕಾಮಗಾರಿಯು ತಿಂಗಳ ಹಿಂದೆ ನಡೆದಿದ್ದು, ಒಂದು ತಿಂಗಳಲ್ಲಿ ರಸ್ತೆಯ ಡಾಂಬರು ಎದ್ದು ಹೋಗಿದೆ. ಈ ರಸ್ತೆಯ ಕಾಮಗಾರಿಯು ಸಂಪೂರ್ಣ ಕಳಪೆಯಾಗಿದ್ದು, ಇದಕ್ಕೆ ಸಂಬಂಧಪಟ್ಟ ಗುತ್ತಿಗೆದಾರರು ಹಾಗೂ ಅಭಿಯಂತರರು ನೇರ ಹೊಣೆಗಾರರಾಗಿದ್ದು, ಇದನ್ನು ಮರುಡಾಂಬರೀಕರಣ ಮಾಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಮರುಡಾಂಬರೀಕರಣ ಮಾಡದಿದ್ದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸುಳಿವು ನೀಡಿದ್ದಾರೆ.