ವೀರಾಜಪೇಟೆ, ಜೂ. 29: ವೀರಾಜಪೇಟೆಯ ತ್ರಿವೇಣಿ ಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸ ಲಾಯಿತು. ಯೋಗದಿಂದ ಮಾನಸಿಕ ನೆಮ್ಮದಿ ಹಾಗೂ ಏಕಾಗ್ರತೆ ಸಾಧ್ಯ ಎಂದು ಸಂಸ್ಥೆಯ ಅಧ್ಯಕ್ಷ ಚೆರುಮಂದಂಡ ಎಂ. ನಾಣಯ್ಯ ಈ ಸಂದರ್ಭ ಹೇಳಿದರು.

ಕಾರ್ಯದರ್ಶಿ ಮುಲ್ಲೇರ ಪೊನ್ನಮ್ಮ ಮುಖ್ಯ ಶಿಕ್ಷಕಿ ಕವಿತಾ ಶೆಟ್ಟಿ, ವಿದ್ಯಾರ್ಥಿಗಳಿಗೆ ದಿನದ ಮಹತ್ವವನ್ನು ತಿಳಿಸಿಕೊಟ್ಟರು. ಶಿಕ್ಷಕರಾದ ಎಂ.ಎಂ. ಅರುಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜು ಡಿ.ಕೆ. ಸ್ವಾಗತಿಸಿ, ಸಿ.ಎನ್. ಸವಿತಾ ವಂದಿಸಿದರು. ಪ್ರತಿಮ ಕಾರ್ಯಕ್ರಮ ನಿರೂಪಿಸಿದರು.