ಸುಂಟಿಕೊಪ್ಪ, ಜೂ. 29: ಸೋಮವಾರಪೇಟೆ ತಾಲೂಕು ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬೇಡ್ಕರ್ ಕಾಲೋನಿಯಿಂದ ಹಾದು ಹೋಗುವ ರಸ್ತೆಯಲ್ಲಿ ಸುಮಾರು 5-6 ಮನೆಗಳಿದ್ದು, ಮೂಲ ಸೌಕರ್ಯವಾದ ರಸ್ತೆಯೇ ಇಲ್ಲದಂತಾಗಿದೆ. ಸರಕಾರದಿಂದ 2 ಬಾರಿ ಅನುದಾನ ಬಂದರೂ ರಸ್ತೆ ದುರಸ್ತಿ ಕಾರ್ಯ ಇನ್ನೂ ನಡೆದಿಲ್ಲ. ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.