ಮಡಿಕೇರಿ, ಜೂ. 29 : ಸಿರಿಗನ್ನಡ ವೇದಿಕೆಯ ಮಡಿಕೇರಿ ನಗರ ಅಧ್ಯಕ್ಷರಾಗಿ ವಕೀಲರಾದ ಅಚ್ಚಾಂಡೀರ ಪವನ್ ಪೆಮ್ಮಯ್ಯ ಹಾಗೂ ವೀರಾಜಪೇಟೆ ನಗರ ಅಧ್ಯಕ್ಷರಾಗಿ ರಾಜೇಶ್ ಪದ್ಮನಾಭ ಅವರು ಆಯ್ಕೆಯಾಗಿದ್ದಾರೆ ಎಂದು ಸಿರಿ ಕನ್ನಡ ವೇದಿಕೆಯ ಜಿಲ್ಲಾಧ್ಯಕ್ಷ ಅಲ್ಲಾರಂಡ ವಿಠಲ್ ನಂಜಪ್ಪ ತಿಳಿಸಿದ್ದಾರೆ.

ಸೋಮವಾರಪೇಟೆ ತಾಲೂಕು ಅಧ್ಯಕ್ಷರಾಗಿ ಮೋಹಿದಿನ್ ಹಾಗೂ ವೀರಾಜಪೇಟೆ ತಾಲೂಕು ಅಧ್ಯಕ್ಷರಾಗಿ ಪೂಮಾಲೆ ಪತ್ರಿಕೆಯ ಸಂಪಾದಕ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.

ನೂತನ ಅಧ್ಯಕ್ಷರುಗಳ ಪದಗ್ರಹಣದ ಸಂದರ್ಭ “ಮಳೆ ಕವನ” ಗೋಷ್ಠಿ ಕಾರ್ಯಕ್ರಮವಿದ್ದು, ಆಸಕ್ತ ಕವಿಗಳು ಜು.15ರ ಒಳಗಾಗಿ ಮಳೆಗಾಲದ ಹಾಸ್ಯ ಮಿಶ್ರಿತ ಹಾಗೂ ಮಳೆಗಾಲದ ನೋವು ನಲಿವಿನ ಕವನಗಳನ್ನು ಕಳುಹಿಸಿ ಕೊಡುವಂತೆ ಮನವಿ ಮಾಡಿದ್ದಾರೆ.

ಉದಯೋನ್ಮೊಖ ಕವಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಎಲ್ಲಾ ಕವಿತೆಗಳನ್ನು ಸ್ವೀಕಾರ ಮಾಡಲಾಗುವದು.

ಆಸಕ್ತರು ತಮ್ಮ ಪೂರ್ಣ ವಿಳಾಸದೊಂದಿಗೆ ಕವಿತೆಗಳನ್ನು ಅಲ್ಲಾರಂಡ ವಿಠಲ ನಂಜಪ್ಪ, ಅಲ್ಲಾರಂಡ ರಂಗ ಚಾವಡಿ, ಕರವಲೆ ಬಾಡಗ, ಮಡಿಕೇರಿ, ಈ ವಿಳಾಸಕ್ಕೆ ಕಳುಹಿಸಿಕೊಡಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ 9448312310, 973819508, 9448504282, ಸಂಪರ್ಕಿಸ ಬಹುದಾಗಿದೆ.