ಶನಿವಾರಸಂತೆ, ಜೂ. 29: ಪಟ್ಟಣದ ರೋಟರಿ ಕ್ಲಬ್ ಹಾಗೂ ಶ್ರೀಮಂಜುನಾಥೇಶ್ವರ ಎಂಜಿನಿಯರಿಂಗ್ ವಕ್ರ್ಸ್ ಸಹಭಾಗಿತ್ವದಲ್ಲಿ ಕಾಫಿ ಬೋರರ್ ಗಿಡಗಳನ್ನು ಕೇವಲ 2 ನಿಮಿಷದಲ್ಲಿ ಯಂತ್ರದ ಮೂಲಕ ಕೀಳುವ ಪ್ರಾತ್ಯಕ್ಷಿಕೆ ಕಾರ್ಯಕ್ರಮ ತಾ. 30ರಂದು (ಇಂದು) ಬೆಳಿಗ್ಗೆ 10.30ರಿಂದ 12ರವರೆಗೆ ಚಿನ್ನಳ್ಳಿ ರಸ್ತೆಯ ಬಸವೇಶ್ವರ ನಗರದ ರುದ್ರೇಶ್ ಮತ್ತು ಮಹೇಶ್ ಅವರ ತೋಟದಲ್ಲಿ ನಡೆಯಲಿದೆ.

ಯಂತ್ರದ ಪ್ರಾತ್ಯಕ್ಷಿಕೆಯನ್ನು ರೋಟರಿ ಕ್ಲಬ್ ಅಧ್ಯಕ್ಷ ಎಚ್.ಎಸ್. ವಸಂತ್ ಕುಮಾರ್ ಉದ್ಘಾಟಿಸುತ್ತಾರೆ. ಮುಖ್ಯ ಅತಿಥಿಗಳಾಗಿ ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಆರ್.ಪಿ. ಲಕ್ಷ್ಮಣ್, ಶನಿವಾರಸಂತೆ ಕಾಫಿ ಮಂಡಳಿ ಹಿರಿಯ ಸಂಪರ್ಕಾಧಿಕಾರಿ ಎಚ್. ವಿಶ್ವನಾಥ್, ರೊಟೇರಿಯನ್‍ಗಳಾದ ಟಿ.ಆರ್. ಪುರುಷೋತ್ತಮ್ ಹಾಗೂ ಎಸ್.ಎಸ್. ಸಾಗರ್ ಪಾಲ್ಗೊಳ್ಳುತ್ತಾರೆ ಎಂದು ಕೃಷಿ ವಿಜ್ಞಾನಿ ಎ.ಡಿ. ಮೋಹನ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.