ಚೆಟ್ಟಳ್ಳಿ, ಜೂ. 29: ಜಲಾನಯನ ಇಲಾಖೆ ವತಿಯಿಂದ ನೀಡುವ ತರಕಾರಿ ಬೀಜಗಳನ್ನು ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಅವರು ಈರಳೆವಳಮುಡಿ ಗ್ರಾಮದವರಿಗೆ ವಿತರಿಸಿದರು. ಈ ಸಂದÀರ್ಭ ಮಾತನಾಡಿ, ಸಾವಯವ ತರಕಾರಿಗಳನ್ನು ಬೆಳೆದು ತಿಂದರೆ ಆರೋಗ್ಯವಾಗಿರಬಹುದು. ಮನೆಯ ಆರ್.ಸಿ.ಸಿ. ಮೇಲೆ, ಮನೆಯ ಸುತ್ತಮುತ್ತ ಜಾಗದಲ್ಲಿ ತರಕಾರಿಗಳನ್ನು ಬೆಳೆಯಬಹುದು. ಹೀಗೆ ತರಕಾರಿಗಳನ್ನು ಸ್ವತಃ ಬೆಳೆದು ತಿಂದು ಸದೃಢರಾಗಿರಿ ಎಂದು ಸಲಹೆಯಿತ್ತರು.