ಮಡಿಕೇರಿ, ಜೂ. 29: ಕೊಡಗು ಜಿಲ್ಲೆ ಕಂಡ ಹಿರಿಯ ರಾಜಕಾರಣಿಗಳು ಇವರಿಬ್ಬರು. ಜಿಲ್ಲೆ ಮಾತ್ರವಲ್ಲದೆ ರಾಜ್ಯದಲ್ಲೂ ಯಂ.ಸಿ. ನಾಣಯ್ಯ ಹಾಗೂ ಎ.ಕೆ. ಸುಬ್ಬಯ್ಯ ಅವರು ಪ್ರಖ್ಯಾತರಾಗಿದ್ದಾರೆ. ಈ ಇಬ್ಬರು ಹಿರಿಯರು ಮಡಿಕೇರಿ ಯಲ್ಲಿ ಪರಸ್ಪರ ಭೇಟಿಯಾಗಿದ್ದ ಸಂದರ್ಭವಿದು. ಕಳೆದ ಹಲವು ಸಮಯದ ಹಿಂದೆ ಈ ಇಬ್ಬರೂ ಅನಾರೋಗ್ಯಕ್ಕೆ ತುತ್ತಾಗಿದ್ದರು. ಪತ್ರಿಕಾಗೋಷ್ಠಿಯೊಂದಕ್ಕೆ ಆಗಮಿಸಿದ್ದ ಎ.ಕೆ. ಸುಬ್ಬಯ್ಯ ಅವರು ನಗರದ ಸ್ಟಿವರ್ಟ್ ಹಿಲ್‍ನಲ್ಲಿ ಯಂ.ಸಿ.ಎನ್. ನಿವಾಸಕ್ಕೆ ತೆರಳಿ ಉಭಯ ಕುಶಲೋಪರಿ ವಿಚಾರಿಸಿದರು. ಈ ಸಂದರ್ಭ ಅನುಭವಸ್ತ ರಾಜಕಾರಣಿಗಳಾದ ಇವರಿಬ್ಬರು ಜಿಲ್ಲೆಯ ಕೆಲವು ಸಮಸ್ಯೆ, ಈಗಿನ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದರು.