ಗೋಣಿಕೊಪ್ಪ ವರದಿ, ಜೂ. 29 : ಕನ್ನಡದ ಖಾಸಗಿ ಕಲರ್ಸ್ ಕನ್ನಡ ಚಾನಲ್ ನಡೆಸುವ ಕೋಗಿಲೆ ಹಾಡುಗಾರಿಕೆ ಸ್ಪರ್ಧೆಗೆ ಮಾಚಂಡ ಶರಣ್ ಅಯ್ಯಪ್ಪ ಆಯ್ಕೆಯಾಗಿದ್ದಾರೆ.

ಪ್ರಸ್ತುತ ಮೈಸೂರಿನಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಇವರು ಮಾಚಂಡ ಮನು ಮುತ್ತಪ್ಪ ಹಾಗೂ ಇಂದಿರ ದಂಪತಿಯ ಪುತ್ರ. ಕಾರ್ಯಕ್ರಮವು ಶನಿವಾರ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ.