ಮಾದಾಪುರ, ಜೂ. 29: ವಿವಿಧ ಸಂಘ ಸಂಸ್ಥೆಗಳು, ರೈತರ ಸಹಯೋಗದೊಂದಿಗೆ ಹೈನುಗಾರಿಕೆ ಅಭಿವೃದ್ಧಿ ಸಂಬಂಧ ಕೇಂದ್ರ ಸರಕಾರದ ನೆರವು ಕುರಿತು ಇಲ್ಲಿನ ವಿಎಸ್‍ಎಸ್‍ಎನ್ ಸಭಾಂಗಣದಲ್ಲಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10.30 ಗಂಟೆಗೆ ಜುಲೈ 2ರಂದು ಕಾರ್ಯಾಗಾರ ಆರಂಭಗೊಳ್ಳಲಿದೆ ಎಂದು ಪ್ರಗತಿಪರ ರೈತ ಪಿ.ಎಸ್. ರತೀಶ್ ತಿಳಿಸಿದ್ದಾರೆ.