ಗುಡ್ಡೆಹೊಸೂರು, ಜು. 2: ಇಲ್ಲಿನ ಕಾವೇರಿ ಗ್ರಾಮೀಣ ಬ್ಯಾಂಕಿನ ಅಧಿಕಾರಿ ಎಂ.ಸಿ. ಇಂದಿರಾ ನಿವೃತ್ತಿಗೊಂಡ ಹಿನ್ನೆಲೆ ಅವರನ್ನು ಬ್ಯಾಂಕಿನ ಆವರಣದಲ್ಲಿ ಸನ್ಮಾನಿಸಲಾಯಿತು. ಗುಡ್ಡೆಹೊಸೂರು ಶಾಖೆಯ ವ್ಯವಸ್ಥಾಪಕ ಅಶೋಕ್ ಕುಮಾರ್, ಪ್ರಾದೇಶಿಕ ಅಧಿಕಾರಿ ಚಂದ್ರಶೇಖರ್ ಶೆಟ್ಟಿ, ಮತ್ತು ವಿವಿಧ ಬ್ಯಾಂಕಿನ ವ್ಯವಸ್ಥಾಪಕರಾದ ಸೋಮಣ್ಣ, ಜಗನ್ನಾಥ್, ಗ್ರಾ.ಪಂ. ಅಧ್ಯಕ್ಷೆ ಭಾರತಿ, ಸಿಬ್ಬಂದಿ ವರ್ಗ ಮತ್ತು ಜಿಲ್ಲೆಯ ವಿವಿಧ ಶಾಖೆಗಳ ವ್ಯವಸ್ಥಾಪಕರು ಮತ್ತು ಗ್ರಾಮಸ್ಥರು ಹಾಜರಿದ್ದರು.