ಭಾಗಮಂಡಲ, ಜು. 3: ನಗರ ವ್ಯಾಪ್ತಿಯಲ್ಲಿ ವಾಹನ ಚಾಲಕರು ಅತೀ ಕಡಿಮೆ ವೇಗದಲ್ಲಿ ವಾಹನಚಲಿಸಬೇಕು; ವಾಹನ ಚಾಲನೆ ಸಂದರ್ಭದಲ್ಲಿ ಮೊಬೈಲ್ ಫೋನ್ ಬಳಸದೇ ಕಡ್ಡಾಯವಾಗಿ ಸೀಟ್ ಬೇಲ್ಟ್ ಹಾಕಿ ಚಾಲನೆ ಮಾಡಿ ಕಾನೂನು ಉಲ್ಲಂಘನೆ ಮಾಡದೆಯೇ ವಾಹನ ಚಲಿಸಿ ಎಂದು ಭಾಗಮಂಡಲ ಠಾಣಾ ಅಧಿಕಾರಿ ವೆಂಕಟರಮಣ ಹೇಳಿದರು.

ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸಂಚಾರ ನಿರ್ವಹಣೆ ಮತ್ತು ರಸ್ತೆ ಸಂರಕ್ಷತಾ ಮಾಸದ ಅಂಗವಾಗಿ ಸ್ಥಳೀಯ ಕಾಲೇಜು, ವಾಹನ ಚಾಲಕರಿಗೆ, ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಕಾರ್ಯ ಕ್ರಮದಲ್ಲಿ ವೃತ್ತನಿಕ್ಷಕ ಸಿದ್ಧಯ್ಯ, ಸಿಂಬ್ಬದಿಗಳಾದ ಶಿವರಾಮ್, ನಂಜುಂಡ, ಕಾಲೇಜಿನ ಉಪಾನ್ಯಾಸಕರು ಭಾಗವಹಿಸಿದ್ದರು.