ಮಡಿಕೇರಿ, ಜು. 3: ಕೊಂಡಂಗೇರಿಯಲ್ಲಿರುವ ಕೊಡಗು ಜಿಲ್ಲಾ ಮುಸ್ಲಿಂ ಅನಾಥಾಲಯದಲ್ಲಿ ತಾ. 14 ರಂದು ಜಿಲ್ಲಾಮಟ್ಟದ ಹಜ್ ತರಬೇತಿ ಶಿಬಿರ ಹಾಗೂ ಬೀಳ್ಕೊಡುಗೆ ಏರ್ಪಡಿಸಲಾಗಿದೆ. ಈ ವರ್ಷದ ಪವಿತ್ರ ಹಜ್ ಯಾತ್ರೆ ಕೈಗೊಂಡ ಜಿಲ್ಲೆಯ ಭಕ್ತಾದಿಗಳು ಈ ಏಕದಿನ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಅನಾಥಾಲಯದ ಪ್ರಿನ್ಸಿಪಾಲ್ ಕೆ.ಎಸ್. ಶಾದುಲಿ ಫೈಝಿ ಕೋರಿಕೊಂಡಿದ್ದಾರೆ. ಅಂದು ಅನಾಥಾಲಯದ ಮಕ್ಕಳಿಂದ ಪ್ರಾರ್ಥನೆ ಹಾಗೂ ಧರ್ಮಗುರು ಅಬ್ದುಲ್ ರಶೀದ್ ದಾರಿಮಿ ನೂಞÉೂೀರಿ ಅವರು ಹಜ್ ಕರ್ಮದ ವಿಧಾನಗಳ ಸಂಪೂರ್ಣ ಮಾಹಿತಿ ಮಾಡಿಕೊಡಲಿದ್ದಾರೆ ಎಂದು ಶಾದುಲಿ ಫೈಝಿ ತಿಳಿಸಿದ್ದಾರೆ.