ವೀರಾಜಪೇಟೆ, ಜು. 4: ಇತ್ತೀಚೆಗೆ ಸೋಮವಾರಪೇಟೆ ತಾಲೂಕಿನ ಗರಗಂದೂರು ನಿವಾಸಿ ಆಟೋ ಚಾಲಕ ಗಣೇಶ್ ಅವರು ಇತ್ತೀಚೆಗೆ ಅಪಘಾತವೊಂದರಲ್ಲಿ ಮರಣಹೊಂದಿದ್ದು, ವೀರಾಜಪೇಟೆ ನವಜ್ಯೋತಿ ಯುವಕ ಸಂಘವು ಗಣೇಶ್ ಅವರ ಪತ್ನಿ ಸವಿತ ಅವರ ತಾಯಿ ಸರೋಜಮ್ಮ ಅವರಿಗೆ ರೂ 10,000 ಧನ ಸಹಾಯ ನೀಡಿ ಸಾಂತ್ವನ ಹೇಳಿತು. ಈ ಸಂದÀರ್ಭದಲ್ಲಿ ಸಂಘದ ಅಧ್ಯಕ್ಷ ಜನಾರ್ಧನ, ಕಾರ್ಯದÀರ್ಶಿ ರವಿ ಸದಸ್ಯರಾದ ಕ್ಸೇವಿಯರ್, ಸುನೀಲ್, ಸುನೀಲ್, ಪ್ರಸನ್ನ, ಸುರೇಶ್ ಮತ್ತು ಜ್ಯೋಡಿವ್ಯಾಸ್ ಹಾಗೂ ಗ್ರಾಮಸ್ಥರು ಹಾಜರಿದ್ದರು.