ವೀರಾಜಪೇಟೆ: ವೈದ್ಯ ವೃತ್ತಿ ಅಮೂಲ್ಯವಾದದ್ದು, ವೈದ್ಯರು ನಿಷ್ಪಕ್ಷಪಾತ ಸೇವೆ ಸಲ್ಲಿಸುವಂತಾಗಬೇಕು ಎಂದು ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ವಿಶ್ವನಾಥ್ ಸಿಂಪಿ ಅಭಿಪ್ರಾಯಪಟ್ಟರು.

ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಸಂದರ್ಭ ಡಾ. ಆನಂದ್, ಡಾ. ಗಿರಿಧರ್, ಡಾ. ಪ್ರಧಾನ್, ಡಾ. ರೇಣುಕಾ, ಡಾ. ಹೇಮಪ್ರಿಯ, ಡಾ. ಅನಿಲ್‍ಧವನ್, ಹಿರಿಯ ಹಾಗೂ ಕಿರಿಯ ದಾದಿಯರು ಆಸ್ಪತ್ರೆಯ ಎಲ್ಲ ಸಿಬ್ಬಂದಿ ವರ್ಗದವರು ಹಾಜರಿದ್ದರು.ಕುಶಾಲನಗರ: ಕುಶಾಲನಗರ ವಾಸವಿ ಯುವಜನ ಸಂಘದ ಆಶ್ರಯದಲ್ಲಿ ವೈದ್ಯರ ದಿನಾಚರಣೆ ನಡೆಯಿತು. ಸ್ಥಳೀಯ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಂಘದ ಪದಾಧಿಕಾರಿಗಳು ಆರೋಗ್ಯ ಕೇಂದ್ರದ ವೈದ್ಯರಾದ ಡಾ. ಕೀರ್ತಿರಾಜು, ಡಾ. ಕಿರಣ್, ಡಾ. ವಸುಂಧರಾ, ಡಾ. ಹರೀಶ್ ಅವರಿಗೆ ಹೂಗುಚ್ಚ ನೀಡಿ, ಸಿಹಿ ಹಂಚುವ ಮೂಲಕ ಗೌರವಿಸಿದರು. ಕಾರ್ಯಕ್ರಮದ ಅಂಗವಾಗಿ ಆರೋಗ್ಯ ಕೇಂದ್ರದ ಆವರಣದಲ್ಲಿ ಗಿಡ ನೆಡಲಾಯಿತು.

ಈ ಸಂದರ್ಭ ವಾಸವಿ ಯುವಜನ ಸಂಘದ ಉಪಾಧ್ಯಕ್ಷರುಗಳಾದ ವೈಶಾಖ್, ಕೆ. ಪ್ರವೀಣ್, ಮಾಜಿ ಅಧ್ಯಕ್ಷರುಗಳಾದ ವಿ.ಆರ್. ಮಂಜುನಾಥ್, ಎ.ಎಸ್. ಕುಮಾರ್, ಕಾರ್ಯದರ್ಶಿ ಅರ್ಜುನ್ ಎನ್.ಗುಪ್ತ, ಖಜಾಂಚಿ ಚೇತನ್, ಪ್ರಮುಖರಾದ ಆದರ್ಶ, ರಾಜು, ಕಾವೇರಿ ಪರಿಸರ ಸಂರಕ್ಷಣಾ ಬಳಗದ ಸಂಚಾಲಕ ಎಂ.ಎನ್. ಚಂದ್ರಮೋಹನ್ ಇದ್ದರು.