ಗೋಣಿಕೊಪ್ಪ ವರದಿ, ಜು. 9 : ತಿತಿಮತಿ ತಾತ್ಕಾಲಿಕ ಸೇತುವೆಯ ದುರಸ್ತಿ ಕಾರ್ಯ ಮುಂದುವರಿದಿರು ವದರಿಂದ ರಸ್ತೆ ಸಂಪರ್ಕಕ್ಕೆ ಅವಕಾಶ ನೀಡುತ್ತಿಲ್ಲ. ಇದರಿಂದಾಗಿ ವಾಹನ ಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸುತ್ತಿರುವದು ಮುಂದು ವರಿದಿದೆ.

ಮಳೆ ಪ್ರಮಾಣ ಹೆಚ್ಚಾದ ಕಾರಣ ಹೊಳೆಯಲ್ಲಿ ನೀರು ಹೆಚ್ಚಾಗುತ್ತಿರು ವದರಿಂದ ಕೆಲಸ ಮಂದಗತಿಯಲ್ಲಿ ಸಾಗುವಂತಾಗಿದೆ. ಭಾನುವಾರದಿಂದ ವಾಹನಗಳು ಮಾಲ್ದಾರೆ ಹಾಗೂ ನಾಗರಹೊಳೆ ಮಾರ್ಗವಾಗಿ ಸಂಚರಿಸುತ್ತಿವೆ.