ಮಡಿಕೇರಿ, ಜು. 9: ಮಡಿಕೇರಿ ಸನಿಹದ ಕಡಗದಾಳು ಪ್ರೌಢಶಾಲೆ ಯಲ್ಲಿ ಶಾಲಾ ಸಂಸತ್ತಿನ ಮಂತ್ರಿಗಳಿಗೆ ಪ್ರಮಾಣ ವಚನ ಸ್ವೀಕಾರ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕಿ ಗಂಗಮ್ಮ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಊರಿನವರು ಹಾಗೂ ಮಡಿಕೇರಿ ಆಕಾಶವಾಣಿ ಉದ್ಘೋಷಕ ಮಾದೇಟಿರ ಬೆಳ್ಯಪ್ಪ ಆಗಮಿಸಿದ್ದರು. ಮುಖ್ಯ ಅತಿಥಿಗಳು ಶಾಲಾ ಸಂಸತ್ತಿನ ಮಂತ್ರಿ ಮತ್ತು ಉಪ ಮಂತ್ರಿಗಳ ಛಾಯಾಚಿತ್ರವನ್ನು ಅನಾವರಣ ಗೊಳಿಸುವ ಮೂಲಕ ಉದ್ಘಾಟನೆ ಮಾಡಿದರು. ಶಾಲಾ ನಾಯಕನಾಗಿ ಎಂ.ಡಿ. ನಾಣಯ್ಯ ಹಾಗೂ ಎಲ್ಲಾ ಇತರ ಮಂತ್ರಿಗಳಿಗೆ ಬೆಳ್ಯಪ್ಪ ಪ್ರಮಾಣ ವಚನ ಭೋದಿಸಿ ದರು. ನಾಯಕತ್ವ ಗುಣಗಳ ಬಗ್ಗೆ ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕರು ನಾಯಕರ ಜವಾಬ್ದಾರಿ, ಮಂತ್ರಿಗಳ ಪ್ರತಿನಿಧಿ ಯಾಗಿ ನಿರ್ವಹಿ ಸುವ ಕಾರ್ಯ, ಶಿಸ್ತು ಇತ್ಯಾದಿ ವಿಚಾರಗಳನ್ನು ತಿಳಿಸಿದರು. ಪಿ.ಎಸ್. ವಿಮಲ ಅತಿಥಿಗಳನ್ನು ಸ್ವಾಗತ ಮಾಡು ವದರ ಜೊತೆಗೆ ಪ್ರಾಸ್ತಾವಿಕ ನುಡಿ ಗಳನ್ನಾಡಿದರು. ಆರತಿ ವಂದಿಸಿದರು.