ಗುಡ್ಡೆಹೊಸೂರು, ಜು. 10: ಇಲ್ಲಿನ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಕುಶಾಲನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ 7 ದಿನಗಳ ವಿಶೇಷ ಶಿಬಿರ ಏರ್ಪಡಿಸಲಾಗಿದೆ.

ಉದ್ಘಾಟನೆಯನ್ನು ಗುಡ್ಡೆಹೊಸೂರಿನ ಐ.ಎನ್.ಎಸ್. ಕ್ರೀಡಾಂಗಣದ ಮಾಲೀಕರಾದ ಐಚ್ಚೆಟ್ಟಿರ ಸೋಮಯ್ಯ ನೆರವೇರಿಸಿದರು. ಅಧ್ಯಕ್ಷತೆಯನ್ನು ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ವೆಂಕಟೇಶ್ ಡಿ. ಬೆಮ್ಮತ್ತಿ ವಹಿಸಿದ್ದರು.

ಈ ಸಂದರ್ಭ ಶಿಬಿರಾಧಿಕಾರಿ ಪ್ರಸಾದ್ ಸಾಲಿಯಾನ್, ಕಾಲೇಜಿನ ಸಹಾಯಕ ಅಧಿಕಾರಿ ಬಿ.ಸಿ. ಲಿಂಗರಾಜ್, ಎಸ್.ಡಿ.ಎಂ.ಸಿ ಅಧ್ಯಕ್ಷ ಬಿ.ಎಸ್. ದಿನೇಶ್ ಮತ್ತು ಗ್ರಾ.ಪಂ. ಅಧ್ಯಕ್ಷೆ ಕೆ.ಎಸ್. ಭಾರತಿ, ಗುಡ್ಡೆಹೊಸೂರು ಶಾಲಾ ಮುಖ್ಯ ಶಿಕ್ಷಕ ಸಣ್ಣಸ್ವಾಮಿ, ಬೋಯಿಕೇರಿ ಶಾಲಾ ಮುಖ್ಯ ಶಿಕ್ಷಕ ಹೆಚ್.ಆರ್. ರಾಜು, ಉದ್ಯಮಿ ಬಿ.ಸಿ. ಪ್ರದೀಪ್ ಮುಂತಾದವರು ಹಾಜರಿದ್ದರು.