ಕುಶಾಲನಗರ, ಜು. 12: ಕುಶಾಲನಗರ-ಕೊಪ್ಪ ಕಾವೇರಿ ಸೇತುವೆ ಮೇಲಿಂದ ಅಪರಿಚಿತ ಯುವಕನೊಬ್ಬ ನದಿಗೆ ಹಾರಿ ನೀರು ಪಾಲಾದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ. ಕೊಪ್ಪ ಕಡೆಯಿಂದ ಓಡಿಕೊಂಡು ಬಂದು ಸೇತುವೆಯಿಂದ ಜಿಗಿದಿರುವದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ನದಿಗೆ ಬಿದ್ದ ಯುವಕ ರಭಸದಿಂದ ಹರಿಯುತ್ತಿರುವ ನೀರಿನಲ್ಲಿ ಕೊಚ್ಚಿಹೋಗಿದ್ದು ಸ್ಥಳೀಯರು ತೆಪ್ಪ ಬಳಸಿ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ.

ಬೈಲುಕೊಪ್ಪ ಮತ್ತು ಕುಶಾಲನಗರ ಪೊಲೀಸರು ಮಾಹಿತಿ ತಿಳಿದು ಸ್ಥಳಕ್ಕೆ ಬಂದಿದ್ದು ಮುಂದಿನ ಕ್ರಮಕೈಗೊಂಡಿದ್ದಾರೆ.