ಮಡಿಕೇರಿ, ಜು. 12: ಕೇಂದ್ರ ಸರಕಾರದ ಆರ್ಥಿಕ ಸಲಹಾ ಸಮಿತಿಯ ಅಧ್ಯಕ್ಷರು ಹಾಗೂ ಚಿಕ್ಕಬಳ್ಳಾಪುರ ಸಂಸದರಾಗಿರುವ, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ನೇತೃತ್ವದ ತಂಡ ಈ ಸಂಜೆ ಮಡಿಕೇರಿಗೆ ಆಗಮಿಸಿದೆ.ಇಂದು ಮೈಸೂರಿನಲ್ಲಿ ಈ ಸಮಿತಿಯು ಉನ್ನತ ಮಟ್ಟದ ಸಭೆ ನಡೆಸುವದರೊಂದಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮುದ್ರಣ ವಿಭಾಗಕ್ಕೆ ಖುದ್ದು ಭೇಟಿ ನೀಡಿ ನೋಟುಗಳ ಮುದ್ರಣ ಸಂಬಂಧ ಮಾಹಿತಿ ಕಲೆ ಹಾಕಿದೆ. ಅಲ್ಲದೆ ಅಲ್ಲಿನ ಬ್ಯಾಂಕ್ ಮುಖ್ಯಸ್ಥರು, ಜಿಎಸ್‍ಟಿ ಹಾಗೂ ಆದಾಯ ತೆರಿಗೆ ಅಧಿಕಾರಿಗಳು, ಚೇಂಬರ್ ಆಫ್ ಕಾಮರ್ಸ್ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿದೆ.

ಈ ರಾತ್ರಿ ಮಡಿಕೇರಿಯ ರೆಸಾರ್ಟ್‍ವೊಂದರಲ್ಲಿ ತಂಗಿರುವ ಕೇಂದ್ರ ಆರ್ಥಿಕ ಸಲಹಾ ಸಮಿತಿ ತಂಡ ತಾ. 13 ರಂದು (ಇಂದು) ವೀರಪ್ಪ ಮೊಯ್ಲಿ ಅವರ ನೇತೃತ್ವದಲ್ಲಿ ಕೇಂದ್ರದಿಂದ ಜಾರಿಗೊಂಡಿರುವ ಜಿಎಸ್‍ಟಿ ಕುರಿತು ಹಾಗೂ ಮುದ್ರಾ ಯೋಜನೆ ಇತ್ಯಾದಿ ಸಂಬಂಧ ಉನ್ನತ ಮಟ್ಟದ ಸಭೆ ನಡೆಸಲಿದೆ ಎಂದು ಮೂಲಗಳಿಂದ ಗೊತ್ತಾಗಿದೆ.