ಕೂಡಿಗೆ, ಜು. 12: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಗೆ ಇಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಣೆಕಟ್ಟೆಯಿಂದ ನದಿಗೆ ಹೋಗುವ ನೀರಿನ ಪ್ರಮಾಣವನ್ನು ಹಾಗೂ ಅಣೆಕಟ್ಟೆಯಲ್ಲಿನ ಇದುವರೆಗೆ ಎಷ್ಟು ನೀರು ಸಂಗ್ರಹವಾಗಿದೆ, ಅಲ್ಲದೆ ಯಾವ ರೀತಿಯಲ್ಲಿ ನದಿಗೆ ಮತ್ತು ನಾಲೆಗಳಿಗೆ ನೀರನ್ನು ಹರಿಸಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಪಡೆದರು. ಮುಂಜಾಗೃತಾ ಕ್ರಮವಾಗಿ ಅಣೆಕಟ್ಟೆಯ ಬಳಿಗೆ ಯಾವದೇ ಪ್ರವಾಸಿಗರನ್ನು ಬಿಡದಂತೆ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ಸೂಚನೆ ನೀಡಿದರು.

ಈ ಸಂದರ್ಭ ತಾಲೂಕು ತಹಶೀಲ್ದಾರ್ ಮಹೇಶ್, ಗ್ರಾಮ ಲೆಕ್ಕಿಗರಾದ ಗೌತಮ್, ಸಚಿನ್ ಹಾಗೂ ನೀರಾವರಿ ಇಲಾಖೆಯ ಅಧಿಕಾರಿ ಜಗದೀಶ್, ಕೀರ್ತನ್, ಇಂಜಿನಿಯರ್ ತಂಡ ಇದ್ದರು.