ಮಡಿಕೇರಿ, ಜು. 13: ದ.ಕ. ಜಿಲ್ಲೆಯ ಪುತ್ತೂರಿನ ವ್ಯವಹಾರ ಲೋಕದ ದಿಗ್ಗಜ ಎಂದೇ ಗುರುತಿಸಿಕೊಂಡಿದ್ದ ಸ್ವರ್ಣೋದ್ಯಮದಲ್ಲಿ ಹೊಸ ಶಕೆ ಬರೆದ ಗುಂಡಿಬೈಲು ಲಕ್ಷ್ಮಿನಾರಾಯಣ ಆಚಾರ್ಯ (94) ಅವರು ತಾ. 13 ರಂದು ನಿಧನರಾದರು. ಜಿಲ್ಲೆಯ ಕುಶಾಲನಗರ ಸೇರಿದಂತೆ ಪುತ್ತೂರು, ಸುಳ್ಯ, ಹಾಸನದಲ್ಲಿ ಜಿ.ಎಲ್. ಆಚಾರ್ಯ ಚಿನ್ನದ ಮಳಿಗೆಗಳ ಶಾಖೆಯನ್ನು ಸ್ಥಾಪಿಸಿದ್ದರು.