ಮಡಿಕೇರಿ, ಜು. 13: ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ರಸ್ತೆ ವಿಭಜಗÀಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು ಡಿಕ್ಕಿಯಾದ ಘಟನೆ ಇಂದು ಮುಂಜಾನೆ ನಡೆದಿದೆ. ಮೈಸೂರಿನಿಂದ ಮಂಗಳೂರಿನತ್ತ ತೆರಳುತ್ತಿದ್ದ ಈ ಬಸ್ ಬೆಳಿಗ್ಗೆ 4.30ರ ಸುಮಾರಿಗೆ ಜಿ.ಟಿ. ವೃತ್ತದಲ್ಲಿ ಮಂಜು ಮುಸುಕಿದ್ದ ವಾತಾವರಣದ ನಡುವೆ ವಿಭಜಗಕ್ಕೆ ಡಿಕ್ಕಿಯಾಗಿದೆ. ಘಟನೆಯಿಂದ ಅದೃಷ್ಟವಶಾತ್ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಈ ಸ್ಥಳದಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಇಲ್ಲದಿದ್ದುದು ಘಟನೆಗೆ ಕಾರಣವೆನ್ನಲಾಗಿದೆ. ಈ ಜಾಗದಲ್ಲಿ ಈ ಹಿಂದೆಯೂ ಇಂತಹ ಹಲವು ಅಪಘಾತಗಳು ನಡೆದಿವೆ. ಸ್ಥಳದಲ್ಲಿ ಎಚ್ಚರಿಕೆ ನೀಡುವ ಕೆಂಪುದೀಪ ಅಳವಡಿಸದಿರುವದು ರಿಫ್ಲೆಕ್ಟರ್‍ನಂತಹ ವ್ಯವಸ್ಥೆ ಇಲ್ಲದಿರುವದು ಇಂತಹ ಘಟನೆಗಳಿಗೆ ಕಾರಣವಾಗುತ್ತಿದೆ ಎಂದು ವರ್ತಕರಾದ ಅಂಬೆಕಲ್ ನವೀನ್ ಹೇಳಿದ್ದಾರೆ. -ಟಿ.ಜಿ. ಸತೀಶ್.