ಮೂರ್ನಾಡು, ಜು. 13: ಮಡಿಕೇರಿ ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಮತ್ತು ಪರಿವರ್ತನಾ ಸಂಘದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕಾರ್ಯದರ್ಶಿ ಹಾಗೂ ಅಟೆಂಡರ್‍ಗೆ ಬೀಳ್ಕೋಡುವ ಸಮಾರಂಭ ನಡೆಯಿತು.

ಸಂಘದ ಸಭಾಂಗಣದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಕಾರ್ಯದರ್ಶಿ ಆಗಿ ಸೇವೆ ಸಲ್ಲಿಸಿದ ಎಂ.ಜಿ. ಪ್ರೇಮ ಕುಮಾರಿ ಹಾಗೂ ಬಿ.ಸಿ. ಜನಾರ್ಧನ್ ಅವರನ್ನು ಕಿರು ಕಾಣಿಕೆ ನೀಡಿ ಬೀಳ್ಕೋಡಲಾಯಿತು. ಈ ಸಂದರ್ಭ ಸಂಘದ ಆಡಳಿತ ಮಂಡಳಿಯವರು ಮತ್ತು ಸಿಬ್ಬಂದಿ ಹಾಜರಿದ್ದರು.