ಮಡಿಕೇರಿ, ಜು. 13: ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಿಳಿಗೇರಿ ಗ್ರಾಮದ ಕಾರ್ಮಿಕ ಕೆ.ಎಸ್. ಸಂಪತ್ ಎಂಬಾತನ ಪತ್ನಿ ಚಂದ್ರಿಕಾ ಎಂಬಾಕೆ ಜೂ. 29 ರಿಂದ ನಾಪತ್ತೆಯಾಗಿರುವದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜೂ. 29 ರಂದು ಪತಿಯೊಂದಿಗೆ ನಗರಕ್ಕೆ ಬಂದಿದ್ದ ಪತ್ನಿ ಚಂದ್ರಿಕಾ ಗಂಡನ ಬಳಿ ರೂ. 3 ಸಾವಿರ ನಗದು ಪಡೆದು, ಇಲ್ಲಿನ ಇಂದಿರಾ ಗಾಂಧಿ ವೃತ್ತದಲ್ಲಿ ಟೈಲರ್‍ರೊಬ್ಬರಿಗೆ ಬಟ್ಟೆ ಹೊಲಿದ ಹಣ ಪಾವತಿಸಿ ಬರುವದಾಗಿ ತಿಳಿಸಿದ್ದಳೆನ್ನಲಾಗಿದೆ.

ಮಧ್ಯಾಹ್ನ 1 ಗಂಟೆಗೆ ಹೋದಾಕೆ 3 ಗಂಟೆಯಾದರೂ ಹಿಂತಿರುಗದೆ, ಪತಿ ಸಂಪತ್ ಎಲ್ಲೆಡೆ ಹುಡುಕಿದರೂ ಈಕೆ ಪತ್ತೆಯಾಗಿಲ್ಲ. ತನ್ನ ಇಬ್ಬರು ಮಕ್ಕಳೊಂದಿಗೆ ಗಂಡನನ್ನು ಬಿಟ್ಟು ಕಾಣೆಯಾಗಿರುವ ಪತ್ನಿಯ ಪತ್ತೆಗಾಗಿ ಸಂಪತ್ ಪೊಲೀಸರ ಮೊರೆ ಹೋಗಿದ್ದಾರೆ.