ನಾಪೆÇೀಕ್ಲು, ಜು. 14: ಸಮೀಪದ ಹಳೇ ತಾಲೂಕಿನಲ್ಲಿ ಇಂದು ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಸುಮಾರು 20ಕ್ಕೂ ಅಧಿಕ ಮನೆಗಳು ಬೆಂಕಿಗಾಹುತಿ ಯಾಗಿ ಅಪಾರ ನಷ್ಟ ಸಂಭವಿಸಿದ್ದು, ಯಾವದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಅವಘಡಕ್ಕೆ ಚೆಸ್ಕಾಂ ಇಲಾಖೆ ನೇರ ಕಾರಣ. ಅವಘಡ ಸಂಭವಿಸಿದ ಕೂಡಲೆ ಇಲಾಖೆಯ ಮೊಬೈಲ್‍ಗೆ ಕರೆ ಮಾಡಿದರೂ, ಯಾವದೇ ಸ್ಪಂದನ ಸಿಗಲಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕಾಗಮಿಸಿದ ಅಭಿಯಂತರ ಹರೀಶ್ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ವಿಭಾಗದ ಪಿ.ಎಂ. ಬಸೀರ್, ಸಮೀರ್ ಪಿ.ಎಂ., ಹ್ಯಾರೀಸ್ ಬಿ.ಕೆ., ಅಪ್ಪಾಜಿ, ವಿಜೂ, ಜಗದಿ ಮತ್ತಿತರರ 20 ಮನೆಗಳಿಗೆ ಹಾನಿಯಾಗಿದ್ದು, ಕೂಡಲೇ ಪರಿಹಾರವನ್ನು ನೀಡಬೇಕೆಂದು ನಾಪೆÇೀಕ್ಲು ಗ್ರಾಮ ಪಂಚಾಯಿತಿಯ ಸದಸ್ಯ ಮಹಮ್ಮದ್ ಟಿ.ಎ. ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.