ಸುಂಟಿಕೊಪ್ಪ, ಜು. 14: ಮೇಯಲು ಬಿಟ್ಟಿದ್ದ 4 ಜಾನುವಾರುಗಳಲ್ಲಿ ಗಬ್ಬದ ರಾಸುವಿಗೆ ವಿದ್ಯುತ್ ತಂತಿ ತಗುಲಿ ಸಾವಿಗೀಡಾಗಿದೆ ಇದಕ್ಕೆ ಸೆಸ್ಕ್ ನಿಗಮದಿಂದ ಪರಿಹಾರ ನೀಡಬೇಕೆಂದು ಅಭಿಯಂತರರಿಗೆ ಮಾಲೀಕರು ಮನವಿ ಸಲ್ಲಿಸಿದ್ದಾರೆ.

ಗರಗಂದೂರು ಗ್ರಾಮದ ಜಿ.ಆರ್. ಶಾಂತಪ್ಪ ಅವರು ಕಾರ್ಮಿಕರಾಗಿದ್ದು ಜಾನುವಾರುಗಳನ್ನು ಸಾಕಾಣೆ ನಡೆಸುವ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಎಂದಿನಂತೆ ತಾ.13 ರಂದು ಜಾನುವಾರುಗಳನ್ನು ಮೇಯಲು ಬಿಟ್ಟಿದ್ದ ವೇಳೆ ವಿದ್ಯುತ್ ಕಂಬದಿಂದ ತಂತಿಯೊಂದು ಮುರಿದು ಬಿದ್ದಿದ್ದು, ಗರ್ಭಿಣಿÀ ಹಸು ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಸಾವಿಗೀಡಾಗಿದೆ. ಇದರಿಂದ 15,000 ರೂ. ನಷ್ಟವಾಗಿದ್ದು,ಪರಿಹಾರ ಕೊಡಬೇಕೆಂದು ದೂರು ಸಲ್ಲಿಸಿದ್ದಾರೆ.