ಕೂಡಿಗೆ, ಜು. 13: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸ್ಫೂರ್ತಿ ಯುವಕ ಸಂಘ, ಗೋಣಿಮರೂರು ಹಾಗೂ ಕೆರೆ ಸಮಿತಿ ಗೋಣಿಮರೂರು ಇವರ ಸಹಯೋಗದೊಂದಿಗೆ ಕೆರೆಯ ಸುತ್ತ ಕಾಡು ಕಡಿದು ಸ್ವಚ್ಛತೆ ಮಾಡಲಾಗಿದೆ.

ಕಳೆದ ವರ್ಷ ನಮ್ಮೂರ ನಮ್ಮ ಕೆರೆ ಯೋಜನೆಯಡಿಯಲ್ಲಿ ಕೆರೆಯ ಕೆಲಸವನ್ನು ಮಾಡಲಾಗಿತ್ತು. ಈಗ ಒಂದು ವರ್ಷ ಆದ ಕಾರಣ ಅದರ ಸವಿನೆನಪಿಗಾಗಿ ಕೆರೆಯ ಸುತ್ತ ಕಾಡು ಕಡಿದು ಸ್ವಚ್ಛತೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಕೆರೆ ಸಮಿತಿ ಅಧ್ಯಕ್ಷ ರೇವಣ್ಣ, ಉಪಾಧ್ಯಕ್ಷ ಜಯರಾಮ್, ಕಾರ್ಯದರ್ಶಿ ಪರಮೇಶ್, ಜತೆ ಕಾರ್ಯದರ್ಶಿ ಉಮೇಶ್ ಹಾಗೂ ಸಮಿತಿ ಸದಸ್ಯರು ಸ್ಫೂರ್ತಿ, ಯುವಕ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಊರಿನ ಮುಖಂಡರು, ಸೇವಾ ಪ್ರತಿನಿಧಿ ಉಷಾ, ವಲಯದ ಮೇಲ್ವಿಚಾರಕ ವಿನೋದ್ ಕುಮಾರ್ ಭಾಗವಹಿಸಿದ್ದರು.