ಮಡಿಕೇರಿ, ಜು. 13: ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ಸರ್ವದೇವ ದೇವಿಯರ ಸೆಲೆಯಾದ ಡಿವೈನ್ ಪಾರ್ಕ್ ಶ್ರೀಗುರೂಜಿ ಸ್ವಾಮಿ ವಿವೇಕಾನಂದರ ದಿವ್ಯ ಲೀಲಾ ಕ್ಷೇತ್ರ,ಸುಳ್ಯದ ವಿವೇಕ ಜಾಗೃತ ಬಳಗದ ವತಿಯಿಂದ ಇತ್ತೀಚೆಗೆ ಚೆಂಬು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಆತ್ಮೋನ್ನತಿ ಶಿಬಿರ ನಡೆಯಿತು. ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರಿನ ದೇವಕ್ಕಿ ಟೀಚರ್, ಮಡಿಕೇರಿಯ ಪದ್ಮವೇಣಿ ಟೀಚರ್ ಹಾಗೂ ಸುಳ್ಯದ ಇಂದಿರಾ ಗಣೇಶ್ ಆಗಮಿಸಿದ್ದರು.

ದೇವರ ದಿವ್ಯಕೃಪೆಯನ್ನು ಚಿಕ್ಕಾಸೂ ಖರ್ಚಿಲ್ಲದೆ ಪಡೆದು ತಮ್ಮ ಜೀವನವನ್ನು ಪಾವನವಾಗಿಸುವ ಪರಿ ಹಾಗೂ ದೇಶಕ್ಕೆ ಉತ್ತಮ ಸಂತತಿ ನೀಡುವ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ವಿವರಿಸಿದರು.

ಭಗವಂತನ ನಾಮಸ್ಮರಣೆಯಿಂದ ದೈವಪ್ರೀತಿಯನ್ನು ಗಳಿಸುವ ಬಗ್ಗೆ ನೆರೆದಿದ್ದ ಸಭಿಕರಿಗೆ ತಿಳಿಸಿಕೊಟ್ಟರು. ವಿವೇಕ ಜಾಗೃತ ಬಳಗ, ಸುಳ್ಯ ಇದರ ಅಧ್ಯಕ್ಷ ಮಾಧವ ಮುಡೂರು ಹಾಗೂ ಬಳಗದ ಕಾರ್ಯಕರ್ತರು, ಗ್ರಾಮದ ಜನತೆಯ ಸಹಕಾರದೊಂದಿಗೆ ಈ ಶಿಬಿರವನ್ನು ಆಯೋಜಿಸಲಾಗಿತ್ತು.