ಗೋಣಿಕೊಪ್ಪ ವರದಿ, ಜು. 15: ಭದ್ರಗೋಳದಲ್ಲಿ ಕಾರು ಪಲ್ಟಿಯಾಗಿ ಕಾರು ಜಖಂಗೊಂಡ ಘಟನೆ ನಡೆದಿದೆ. ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗೊಂಡು ಜೀವಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರಿನ ರಂಜಿತ್ ಎಂಬವರು ಗೋಣಿಕೊಪ್ಪಕ್ಕೆ ತನ್ನ ಕುಟುಂಬದೊಂದಿಗೆ ಬರುತ್ತಿದ್ದರು. ಈ ಸಂದರ್ಭ ಭದ್ರಗೋಳದಲ್ಲಿ ನಿಯಂತ್ರಣ ತಪ್ಪಿ ಚರಂಡಿಯಲ್ಲಿ ಮಗುಚಿಕೊಂಡಿತು. ನಂತರ ಸ್ಥಳೀಯರ ಸಹಕಾರದಲ್ಲಿ ಕಾರನ್ನು ಮೇಲೆತ್ತಲಾಯಿತು. ವಾಹನ ಜಖಂಗೊಂಡಿದ್ದು, ಕಾರಿನಲ್ಲಿದ್ದವರು ಜೀವಪಾಯದಿಂದ ಪಾರಾಗಿದ್ದಾರೆ.