*ಸಿದ್ದಾಪುರ, ಜು. 15: ನಂಜರಾಯಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯನ್ನು ಆಗಸ್ಟ್ 19 ರಂದು ಮಳೆಗಾಲ ಹಾಗೂ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿರುವದರಿಂದ 3 ತಿಂಗಳು ಮುಂದೂಡಬೇಕೆಂದು ಸಂಘದ ಮಹಾಸಭೆಯಲ್ಲಿ ಅಧ್ಯಕ್ಷ ಮಹೇಶ ಚಂದ್ರ ನಿರ್ಣಯ ಕೈಗೊಂಡು ರಾಜ್ಯದ ಮುಖ್ಯಮಂತ್ರಿ, ಸಹಕಾರ ಮಂತ್ರಿ, ಶಾಸಕ ಅಪ್ಪಚ್ಚು ರಂಜನ್, ಜಿಲ್ಲಾ ಸಹಕಾರ ಇಲಾಖೆಯ ಉಪನಿಂಬಂಧಕರು, ಸಹಾಯಕ ನಿಬಂಧಕರಿಗೆ ಪತ್ರ ಬರೆದು ಆಗ್ರಹಿಸಲಾಗಿದೆ.