ಮಡಿಕೇರಿ, ಜು. 15: ಸಚಿವರೊಬ್ಬರ ಆಪ್ತ ಸಹಾಯಕ ಎಂದು ಕೊಂಡು ವಂಚಿಸಲು ಯತ್ನಿಸಿದ್ದ ಆರೋಪಿ ಬೆಳಗಾವಿ ಮೂಲದ ಪ್ರಮೋದ್ ಕುಲಕರ್ಣಿ ಎಂಬಾತನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

14 ಮಂದಿಯ ಕುಟುಂಬದೊಂದಿಗೆ ಪ್ರವಾಸ ಬಂದು ಅಧಿಕಾರಿಗಳನ್ನು ಮೋಸಗೊಳಿಸಲು ಯತ್ನಿಸಿದ್ದ ಆರೋಪಿ ವಿರುದ್ಧ ನಗರ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ 127/18ರ ಅನ್ವಯ 170, 417, 419 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈತನನ್ನು 15 ದಿನಗಳ ನ್ಯಾಯಾಂಗ ವಶಕ್ಕೆ ನೀಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.