ಕುಶಾಲನಗರ, ಜು. 16: ಬೈಕ್ ಹಾಗೂ ಆಟೋ ನಡುವೆ ಉಂಟಾದ ಅಪಘಾತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಕುಶಾಲನಗರದಲ್ಲಿ ನಡೆದಿದೆ. ಪಟ್ಟಣದ ಜಾಮೀಯಾ ಮಸೀದಿ ವೃತ್ತದಲ್ಲಿ ನಡೆದ ಅಪಘಾತದಲ್ಲಿ ಬೈಕ್ (ಕೆಎ.51.ಇಜೆ.7486) ಸವಾರ ಕೊಪ್ಪ ಗ್ರಾಮದ ಪಿ.ಎನ್. ಗಾಂಧಿ ಎಂಬವರ ಮಗ ತಿಮ್ಮಯ್ಯನ ತಲೆಗೆ ಗಂಭೀರ ಗಾಯವಾಗಿದ್ದು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಸಾಗಿಸಲಾಗಿದೆ.. ಆಟೋ (ಕೆ.ಎ.12.ಬಿ.4175) ಚಾಲಕ ಮುತ್ತಪ್ಪ ಎಂಬವರ ಭುಜಕ್ಕೆ ಪೆಟ್ಟಾಗಿದ್ದು ಸ್ಥಳೀಯ ಸಂಚಾರಿ ಪೊಲೀಸರಿಂದ ಪ್ರಕರಣ ದಾಖಲಾಗಿದೆ.